ಶನಿವಾರ, ಆಗಸ್ಟ್ 27, 2011

ಜಿಲ್ಲಾಧಿಕಾರಿ ಕಚೇರಿಗೆ ಅಷ್ಟ ಬಂಧನ !

ನವೀನ್ ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಮತ್ತು ಕಾವೇರಿ ವನದ ಸುತ್ತಲೂ ಇರುವ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ೮ ಸ್ಥಳಗಳಲ್ಲಿ ಶಾಶ್ವತ ಕಬ್ಬಿಣದ ಗೇಟುಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು,ಜಿಲ್ಲಾಡಳಿತದ ಕ್ರಮವನ್ನೇ ಪ್ರಶ್ನಿಸುವಂತಾಗಿದೆ.
ನಾಗರಿಕ ಹಿತರಕ್ಷಣಾ ಸಮಿತಿ ಮನವಿ ಮೇರೆಗೆ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರ ವಾಯುವಿಹಾರ ಹಾಗೂ ವ್ಯಾಯಾಮಕ್ಕೆ ಅವಕಾಶ ಕಲ್ಪಿಸುವ ಸಂಬಂಧ ವಾಹನ ಸಂಚಾರ ನಿಷೇಧಿಸಿ ಸ್ಥಿರ ಕಬ್ಬಿಣದ ಗೇಟುಗಳ ಅಳವಡಿಕೆಗೆ ಜಿಲ್ಲಾಡಳಿತ ಆದೇಶ ಹೊರಡಿ ಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಶುಕ್ರವಾರ, ಆಗಸ್ಟ್ 19, 2011

ಬೀದಿಗಳಲ್ಲೆಲ್ಲಾ ನಾಯಿ ತಂದಿವೆ ಭೀತಿ

ನವೀನ್ ಮಂಡ್ಯ
ಈಗ ಎಲ್ಲೆಲ್ಲೂ ಬೀದಿ ನಾಯಿಗಳದ್ದೇ ಮಾತು. ಅಲ್ಲಿ ಇಷ್ಟು ಮಕ್ಕಳಿಗೆ ನಾಯಿ ಕಡಿದಿದೆ. ಇಲ್ಲಿ ನಾಯಿ ದಾಳಿಯಿಂದ ಮಗು ಸತ್ತಿದೆ. ಕುರಿ-ಕೋಳಿಗಳನ್ನು ತಿಂದು ಹಾಕಿದೆ. ರಾಸುಗಳ ಮೇಲೆ ದಾಳಿ ನಡೆದಿದೆ ಎಂಬ ಮಾತುಗಳೇ ಎಲ್ಲ ಬಾಯಿಯಲ್ಲೂ ಕೇಳಿ ಬರುತ್ತಿವೆ.
ಮಾಧ್ಯಮಗಳಲಂತೂ ನಿತ್ಯ ಒಂದಿ ಲ್ಲೊಂದು ಭಾಗದಿಂದ ವರದಿ. ಇಂಥ ಪರಿ ಸ್ಥಿತಿಯಲ್ಲಿ ನಾಯಿಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಎಷ್ಟೋ ಕಡೆ ಸ್ಥಳೀಯ ಸಂಸ್ಥೆಗಳ ವಿರುದ್ಧ ಹರಿಹಾಯ್ದು ಪ್ರತಿಭಟಿಸು ವ ಪ್ರಕರಣಗಳು ವರದಿಯಾಗಿವೆ.

ಮಂಗಳವಾರ, ಆಗಸ್ಟ್ 9, 2011

ಕಣ್ಬಿಟ್ಟು ನೋಡಿ... ಇವು ಅಂಗನವಾಡಿ !

ವಿಕ ವಿಶೇಷ ಮಂಡ್ಯ
ಪೆಟ್ಟಿಗೆ ಅಂಗಡಿಯಲ್ಲಿ  ಅಂಗನವಾಡಿ ಕೇಂದ್ರ ನೋಡಿದ್ದೀರಾ...? ಇಲ್ಲ ಎಂಬ ಉತ್ತರವಾದರೆ ಕಲ್ಲಹಳ್ಳಿಗೆ ಬನ್ನಿ ... !
ಹೌದು, ಈ ಚಿತ್ರದಲ್ಲಿ ಕಾಣುತ್ತಿರುವುದು ಅಂಗನವಾಡಿ ಕೇಂದ್ರ. ವಿಚಿತ್ರವಾದರೂ ಇದು ಸತ್ಯ. ನಗರದ ವಿವಿ ನಗರ-ಕಲ್ಲಹಳ್ಳಿ ೬ನೇ ತಿರುವಿನಲ್ಲಿ  ೬ ವರ್ಷದಿಂದ ಸಣ್ಣ  ಪೆಟ್ಟಿಗೆ ಅಂಗಡಿಯಲ್ಲಿ ಕೇಂದ್ರ ನಡೆಯುತ್ತಿದೆ.