ಶುಕ್ರವಾರ, ಸೆಪ್ಟೆಂಬರ್ 9, 2011

ಮರಳಾಯಿತು,ಈಗ ಮಣ್ಣಿಗೆ `ಮರುಳು'!

ಶಿವನಂಜಯ್ಯ ಮದ್ದೂರು
ರಾಜ್ಯದಲ್ಲೀಗ ಅಕ್ರಮ ಗಣಿಗಾರಿಕೆ ಮತ್ತದರ ಪರಿಣಾಮದ್ದೇ ಸದ್ದು. ಈ ನಡುವೆ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಜತೆಗೆ ಮಣ್ಣು ಗಣಿಗಾರಿಕೆಯೂ ಹೊಸದಾಗಿ ಸೇರ್ಪಡೆಗೊಂಡಿದೆ.
ತಾಲೂಕಿನ  ನಾನಾ ಕಡೆ ಹಲವು ವರ್ಷಗಳಿಂದ ಅಕ್ರಮ ಮರಳು ಗಣಿಗಾರಿಕೆ ಅವ್ಯಾ ಹತವಾಗಿ ನಡೆಯುತ್ತಿದೆ. ಶಿಂಷಾ ನದಿ ಪಾತ್ರದ ನಿಷೇಧಿತ ಪ್ರದೇಶಗಳಲ್ಲೂ  ಕದ್ದು ಮುಚ್ಚಿ  ತೆಗೆಯಲಾಗುತ್ತಿದೆ. ಮರಳಿಗೆ ಮರುಳಾಗಿದ್ದವರು ಈಗ ಮಣ್ಣಿನ ವಾಸನೆ ಹಿಡಿದಿದ್ದಾರೆ.
ಸರಕಾರಿ ಭೂಮಿ ಸೇರಿದಂತೆ ಕೆಲವು ಕೆರೆಗಳ ಅಂಗಳದಲ್ಲಿ  ಮಣ್ಣು ತೆಗೆಯಲಾಗುತ್ತಿದೆ. ಇದರಿಂದ ಬಹುತೇಕ ಸರಕಾರಿ ಭೂಮಿ, ಕೆರೆಗಳು ಹಳ್ಳಗಳಾಗಿ ಮಾರ್ಪಟ್ಟಿವೆ. ಪ್ರಮುಖವಾಗಿ ಸೋಮನಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ರುದ್ರಾಕ್ಷಿಪುರ ಗ್ರಾಮದ ಕೆರೆಯಲ್ಲಿ  ಮಣ್ಣು ಗಣಿಗಾರಿಕೆ ನಡೆಯುತ್ತಿದೆ.
ಆರು ತಿಂಗಳಿಂದ ನಿರಂತರವಾಗಿ ಇದು ನಡೆಯುತ್ತಿದೆ. ಪರಿಣಾಮ ಬಹುತೇಕ ಕೆರೆಯಂಗಳದಲ್ಲಿ ರಾತ್ರಿ ವೇಳೆ ಇಟಾಚಿ, ಜೆಸಿಬಿ ಯಂತ್ರಗಳದ್ದೇ ಸದ್ದು. ತೆಗೆದ ಮಣ್ಣನ್ನು  ಟ್ರ್ಯಾಕ್ಟರ್, ಟಿಪ್ಪರ್‌ಗಳ ಮೂಲಕ ಸಾಗಿಸ ಲಾಗುತ್ತಿದೆ. ಇದರಿಂದ ಕೆರೆಗಳಲ್ಲಿ  ೩೦ರಿಂದ ೪೦ಅಡಿ ಆಳದ ಗುಂಡಿಗಳು ಸೃಷ್ಟಿಯಾಗುತ್ತಿವೆ.

ಶನಿವಾರ, ಸೆಪ್ಟೆಂಬರ್ 3, 2011

ಅಕ್ಕಿ ಹೆಬ್ಬಾಳಿಗೆ ಹೇಮಾವತಿ

* ಎಚ್. ಆರ್. ಲೋಕೇಶ್ ಕೆ.ಆರ್.ಪೇಟೆ
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ೨೮ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕಾಲ ಸನ್ನಿಹಿತವಾಗಿದೆ. ಕೆಲವೇ ದಿನಗಳಲ್ಲಿ  ಈ ಗ್ರಾಮಗಳಿಗೆ ಹೇಮಾವತಿ ನದಿ ನೀರು ಲಭ್ಯವಾಗಲಿದೆ.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ರೂಪಿಸಲಾದ ರಾಜೀವ್‌ಗಾಂಧಿ ಕುಡಿಯುವ ನೀರಿನ ಸಮಗ್ರ ಯೋಜನೆಯಡಿ ೨೮ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ತಮ್ಮೂರಿನ ಪಕ್ಕದಲ್ಲೇ ಹೇಮಾವತಿ ನದಿ ಹರಿಯುತ್ತಿದ್ದರೂ  ಪ್ರತಿ ಬೇಸಿಗೆಯಲ್ಲೂ ಈ ಭಾಗದ ಜನರು ನೀರಿನ ತೊಂದರೆ ಅನುಭವಿಸು ತ್ತಲೇ ಇದ್ದರು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ  ಈ ನದಿಯಿಂದಲೇ ನೀರು ಪೂರೈಸುವ ಯೋಜನೆ ಸಿದ್ಧವಾಗಿದೆ. ೨೦೦೮ರಲ್ಲಿ ಆರಂಭಗೊಂಡ ಈ ಯೋಜನೆ ಅಂತಿಮಘಟ್ಟ ತಲುಪಿದೆ. ಇಡೀ ಯೋಜನೆಗೆ ೮.೨೦ ಕೋಟಿ ರೂ. ವೆಚ್ಚವಾಗಿದೆ. ಒಮ್ಮೆಗೆ  ಐದು ಗ್ರಾಮಗಳಂತೆ ಐದಾರು ಹಂತ ಗಳಲ್ಲಿ ಎಲ್ಲ  ೨೮ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಇದಾಗಿದೆ.