ಶುಕ್ರವಾರ, ಜುಲೈ 15, 2011

ಕೆರೆಗೆ ಸೇರುತಿದೆ ಕೊಳಚೆ ನೀರು !

ಮಲಿನವಾಗುತಿದೆ ಗುತ್ತಲು-ಯತ್ತಗದಹಳ್ಳಿ ಕೆರೆ
ನವೀನ್ ಮಂಡ್ಯ
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನಗರದ ಹೊರವಲಯದ ಗುತ್ತಲು-ಯತ್ತಗದಹಳ್ಳಿ ಕೆರೆ ನೀರು ಮಲಿನವಾಗುತ್ತಿದೆ. ಮಂಡ್ಯದ ವಿವಿಧ ಬಡಾವಣೆಗಳ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದು ಇದಕ್ಕೆ ಪ್ರಮುಖ ಕಾರಣ.
ಕೆರೆ ದಡಕ್ಕೆ ನಗರದ ತ್ಯಾಜ್ಯ ವಸ್ತುಗಳನ್ನು ಸುರಿಯುತ್ತಿ ರುವ ನಗರಸಭೆ ಈಗ ಮೋರಿ ಮತ್ತು ಒಳಚರಂಡಿಯ ಮಲಿನ ನೀರನ್ನು ಕೆರೆಗೆ ಬಿಡುವ ಮೂಲಕ ಮತ್ತೊಂದು ತಪ್ಪು ಮಾಡುತ್ತಿದೆ. ಜಿಲ್ಲಾಸ್ಪತ್ರೆಯ ತ್ಯಾಜ್ಯ ನೀರು ಸಹ ಕೆರೆ ಸೇರುತ್ತಿದೆ. ಇದರಿಂದ ಕೆರೆ ಮೂಲಕ್ಕೆ ಧಕ್ಕೆ ಉಂಟಾಗು ತ್ತಿದೆ. ನೀರಿನಲ್ಲಿನ ಮೀನುಗಳು ಅಪಾಯ ಎದುರಿಸುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ