ಬುಧವಾರ, ಜುಲೈ 20, 2011

ವಿಕ ಫೋನ್ ಇನ್ ನಲ್ಲಿ ಕೃಷಿ ಅಧಿಕಾರಿ

ವಿಕ ಸುದ್ದಿಲೋಕ ಮಂಡ್ಯ
ವ್ಯವಸ್ಥೆಯೋ,ಅವ್ಯವಸ್ಥೆಯೋ? ರೈತರು ಮಾತ್ರ ಅತಂತ್ರರಾಗುವುದರ ಜತೆಗೆ ಪರಾವಲಂಬಿಗಳಾಗುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ರೈತರಿ ಗಾಗಿಯೇ ಆಯೋಜಿಸಿದ್ದ  ವಿಶೇಷ ಕಾರ್ಯಕ್ರಮದಲ್ಲಿ ಬಹಿರಂಗ ಗೊಂಡ  ಈ ವಿಷಯ ಚಿಂತನೆಗೆ ಹಚ್ಚಿತು.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಕಾರ್ಯಾ ರಂಭ ವಾಗಿರುವ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಕೃಷಿ ಇಲಾಖೆಯಿಂದ ಸಲಹೆ ಮಾರ್ಗದರ್ಶನ ದೊರಕಿ ಸುವ ಸಲುವಾಗಿ ಪತ್ರಿಕೆಯ ಮಂಡ್ಯ ಕಾರ್ಯಾಲಯದಲ್ಲಿ  ಮಂಗಳ ವಾರ  `ವಿಕ ಫೋನ್ ಇನ್' ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಕೃಷಿ ಇಲಾಖೆ ಜಿಲ್ಲಾ ಜಂಟಿ ಉಪ ನಿದೇರ್ಶಕ ಕೆ. ಸಂಗಯ್ಯ ಓದುಗರ ಜತೆಗೆ ಮುಖಾಮುಖಿ ಯಾದರು. ತಾಂತ್ರಿಕ ಅಧಿಕಾರಿಗಳಾದ ಪ್ರಕಾಶ್ ಮತ್ತು ಶ್ರೀಹರ್ಷ ಹಾಜ ರಿದ್ದು  ಇಲಾಖೆ  ಚಟುವಟಿಕೆಗಳ ಅಂಕಿಅಂಶ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ